‘ತಿರುಪತಿ ಎಕ್ಸ್‌ಪ್ರೆಸ್ ಹಾಡುಗಳಿಗೆ ಕಿಚ್ಚ ಸುದೀಪ್ ಮೆಚ್ಚುಗೆ
Posted date: 17 Thu, Jul 2014 – 05:07:24 PM

 ‘ದಿಲ್‌ವಾಲ’ ಚಿತ್ರದ ನಾಯಕ ಸುಮಂತ್ ನಾಯಕರಾಗಿ ಅಭಿನಯಿಸಿರುವ ‘ತಿರುಪತಿ ಎಕ್ಸ್‌ಪ್ರೆಸ್’ ಚಿತ್ರದ ಹಾಡುಗಳ ಸೀಡಿ ಕಳೆದವಾರ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಅವರು ಅರ್ಜುನ್‌ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ತಿರುಪತಿ ಎಕ್ಸ್‌ಪ್ರೆಸ್’ ಚಿತ್ರದ ಹಾಡುಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
 ಚಿತ್ರ ಸೆನ್ಸಾರ್‌ಗೆ ಸಿದ್ದವಾಗಿದ್ದು, ಇದೇ ತಿಂಗಳು ಅಥವಾ ಆಗಸ್ಟ್ ಮೊದಲವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರು, ಮದ್ದೂರು, ತಿರುಪತಿ, ಹೈದರಾಬಾದ್, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
 ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸಿರುವ ಈ ಚಿತ್ರವನ್ನು ಪಿ.ಕುಮಾರ್ ನಿರ್ದೇಶಿಸಿದ್ದಾರೆ.
ಜಗದೀಶ್‌ವಾಲಿ ಛಾಯಾಗ್ರಹಣ, ಗೌತಮ್‌ರಾಜ್ ಸಂಕಲನ, ಕಣ್ಣನ್ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮಂತ್, ಕೃತಿ ಖರಬಂದ, ಸಾಧುಕೋಕಿಲ, ಬುಲೆಟ್‌ಪ್ರಕಾಶ್, ಅಶೋಕ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed